Monday 7 October 2013

ಸಮುದಾಯದತ್ತ

ದಿನಾಂಕ:05/10/2013ರ ಶನಿವಾರದಂದು ನಮ್ಮ ಶಾಲೆಯಲ್ಲಿ ನಡೆದ ಮೊದಲ
                                                          ಸಮುದಾಯದತ್ತ ಶಾಲಾ ಕಾರ್ಯಕ್ರಮ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಸಂಸ್ಥೆಯ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀ ನಿರಂಜನ ನಾಯಕ್ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೆದೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ  ಶ್ರೀ ಭುಜಂಗ ಶೆಟ್ಟಿ , ಎಸ್,ಡಿ ಎಮ್ ಸಿ ಸದಸ್ಯರಾದ ಶ್ರೀ ದಿನಕರ ಶೆಟ್ಟಿ & ಇತರರು ಭಾಗವಹಿಸಿದ್ದರು. ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮಾರ್ಗದರ್ಶಕರಾಗಿ ಶ್ರೀ ವಿಶ್ವನಾಥ, ಭೌತಶಾಸ್ತ್ರ ಉಪನ್ಯಾಸಕರು, ಸರಕಾರಿ ಪದವಿ ಪೂರ್ವ ಕಾಲೇಜು ತೆಕ್ಕಟ್ಟೆ ಇವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ  ವಿತರಿಸಲಾಯಿತು. ಪಾಲಕರ ಜೊತೆ ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ಚರ್ಚಿಸಿ ಅಗತ್ಯ ಸಲಹೆ ನೀಡಲಾಯಿತು. ಚಿತ್ರಕಲಾ ಶಿಕ್ಷಕ ಶ್ರೀ ಶಿವಾನಂದ ಸ್ವಾಮಿ ಎನ್ ಇವರು ನಿರೂಪಿಸಿದರು. ಸಹಶಿಕ್ಷಕ ಶ್ರೀ ರೇವಣ್ಣ ಟಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಹಶಿಕ್ಷಕ ಮಹಾಬಲೇಶ್ವರ ಭಾಗ್ವತ್ ಇವರು ಸ್ವಾಗತಿಸಿ. ದೈಹಿಕ ಶಿಕ್ಷಣ ಶಿಕ್ಷಕ 
ಶ್ರಿ ಶೇಖರ್ ವಂದಿಸಿದರು. ಎಲ್ಲ ಸಹಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.




















ವರದಿ---- ಮಹಾಬಲೇಶ್ವರ ಭಾಗ್ವತ್
 ಚಿತ್ರಗಳು: ಅಭಿಷೇಕ್ 10ಎ. 

No comments:

Post a Comment