Wednesday 24 September 2014

ನಮ್ಮ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಚಿತ್ರಗಳು

ದಿನಾಂಕ:22/08/2014ರಂದು ನಮ್ಮ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 















ಚಿತ್ರಗಳು ಗಂಗಾಧರ ಎಮ್-ಗಣಕ  ಯಂತ್ರ ಶಿಕ್ಷಕರು

Sunday 17 August 2014

ಪ್ರತಿಭಾ ಕಾರಂಜಿ ಸರ್ವರಿಗೂ ಆದರದ ಸ್ವಾಗತಗಳು



ಆತ್ಮೀಯ ಕರೆಯೋಲೆ 


ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕುಂದಾಪುರ 
        ಸಮೂಹ ಸಂಪನ್ಮೂಲ ಕೇಂದ್ರ ಕುಂದಾಪುರ
ಕ್ಷೇತ್ರ ಸಂಪನ್ಮೂಲ ಕೆಂದ್ರ ಕೆದೂರು 
ಹಾಗೂ 
ಸರಕಾರಿ ಪ್ರೌಢಶಾಲೆ ಕೆದೂರು ಇವರ ಸಂಯುಕ್ತ ಆಶ್ರಯದಲ್ಲಿ 


ದಿನಾಂಕ:21/08/2014 ರಂದು  2014-15 ನೇ ಸಾಲಿನ ಕೆದೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಲಿದೆ
ಈ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ ಬಯಸುವ 
                              
 ಅಧ್ಯಕ್ಷರು,ಹಾಗೂ ಸರ್ವ ಸದಸ್ಯರು S.D.M.C. 
ಹಾಗೂ 
        ಮುಖ್ಯ ಶಿಕ್ಷಕರು,ಬೋಧಕ&ಬೋಧಕೇತರ ಸಿಬ್ಬಂದಿ,ವಿದ್ಯಾರ್ಥಿಗಳು 
ಸರಕಾರಿ ಪ್ರೌಢಶಾಲೆ ಕೆದೂರು 

Friday 15 August 2014

ಸ್ವಾತಂತ್ರ್ಯ ಸಂಭ್ರಮ

ಸರ್ವರಿಗೂ 68 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು


ಸ್ವಾತಂತ್ರ್ಯ ಸಂಭ್ರಮ

ನಮ್ಮ ಶಾಲೆಯಲ್ಲಿ ಇಂದು ಬೆಳಗ್ಗೆ 9.30ಕ್ಕೆ ಸರಿಯಾಗಿ 68 ನೆಯ  ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣದೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.ರೊಟೇರಿಯನ್ ಶ್ರೀ ಚಂದ್ರಶೇಖರ್ ಹೆಗ್ಡೆ ಶಾನಾಡಿ ಇವರು ಧ್ವಜಾರೋಹಣ ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಶ್ರೀ ಕರುಣಾಕರ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತ್ ಕೆದೂರು, ಶ್ರೀ ಶೇಖರ್ ಶೆಟ್ಟಿ  ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರಿ ಸಂಘ ಕೆದೂರು, ಶ್ರೀ ಅರುಣ್ ಕುಮಾರ್ ಶೆಟ್ಟಿ  ಉದ್ಯಮಿಗಳು&ಮಾಲಕರು ಶ್ರೀ ಸಿದ್ದಿವಿನಾಯಕ್ ಟೆಂಟ್ ಹೌಸ್ ತೆಕ್ಕಟ್ಟೆ  ಇವರು ಭಾಗವಹಿಸಿದ್ದರು.ಹಳೆಯ ವಿದ್ಯಾರ್ಥಿಗಳು, ದಾನಿಗಳು,ವಿದ್ಯಾಭಿಮಾನಿಗಳು, ಪೋಷಕರು,ಪಾಲಕರು ಆಗಮಿಸಿ ಸಮಾರಂಭಕ್ಕೆ ಶುಭ ಕೋರಿದರು. ಶಾಲೆಯ ಬೋಧಕ&ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಿಂದ ವಂದೇಮಾತರಂ, ಧ್ವಜ ಗೀತೆ ಸುಶ್ರಾವ್ಯವಾಗಿ ಮೂಡಿಬಂತು.

             




ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶ್ರೀ ನಿರಂಜನ ನಾಯಕ ಇವರು ಎಲ್ಲರನ್ನೂ ಸ್ವಾಗತಿಸಿ,ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಶೇಖರ್ ನಿರೂಪಿಸಿ ವಂದಿಸಿದರು.ಧ್ವಜಾರೋಹಣ ಕಾರ್ಯಕ್ರಮದ ನಂತರ ಸ್ವಾತಂತ್ರ್ಯ ಸಂಭ್ರಮ ಸಭಾ ಕಾರ್ಯಕ್ರಮ ನಡೆಯಿತು.

 ಚಿತ್ರಗಳು:ಗಂಗಾದರ ಎಮ್ ,ಗಣಕ ಯಂತ್ರ ಶಿಕ್ಷಕರು
ವರದಿ-ಭಾಗ್ವತ್ -ಸ.ಶಿ

Monday 7 October 2013

ಸಮುದಾಯದತ್ತ

ದಿನಾಂಕ:05/10/2013ರ ಶನಿವಾರದಂದು ನಮ್ಮ ಶಾಲೆಯಲ್ಲಿ ನಡೆದ ಮೊದಲ
                                                          ಸಮುದಾಯದತ್ತ ಶಾಲಾ ಕಾರ್ಯಕ್ರಮ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಸಂಸ್ಥೆಯ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀ ನಿರಂಜನ ನಾಯಕ್ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೆದೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ  ಶ್ರೀ ಭುಜಂಗ ಶೆಟ್ಟಿ , ಎಸ್,ಡಿ ಎಮ್ ಸಿ ಸದಸ್ಯರಾದ ಶ್ರೀ ದಿನಕರ ಶೆಟ್ಟಿ & ಇತರರು ಭಾಗವಹಿಸಿದ್ದರು. ಸಮುದಾಯದತ್ತ ಶಾಲಾ ಕಾರ್ಯಕ್ರಮದ ಮಾರ್ಗದರ್ಶಕರಾಗಿ ಶ್ರೀ ವಿಶ್ವನಾಥ, ಭೌತಶಾಸ್ತ್ರ ಉಪನ್ಯಾಸಕರು, ಸರಕಾರಿ ಪದವಿ ಪೂರ್ವ ಕಾಲೇಜು ತೆಕ್ಕಟ್ಟೆ ಇವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ  ವಿತರಿಸಲಾಯಿತು. ಪಾಲಕರ ಜೊತೆ ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ಚರ್ಚಿಸಿ ಅಗತ್ಯ ಸಲಹೆ ನೀಡಲಾಯಿತು. ಚಿತ್ರಕಲಾ ಶಿಕ್ಷಕ ಶ್ರೀ ಶಿವಾನಂದ ಸ್ವಾಮಿ ಎನ್ ಇವರು ನಿರೂಪಿಸಿದರು. ಸಹಶಿಕ್ಷಕ ಶ್ರೀ ರೇವಣ್ಣ ಟಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸಹಶಿಕ್ಷಕ ಮಹಾಬಲೇಶ್ವರ ಭಾಗ್ವತ್ ಇವರು ಸ್ವಾಗತಿಸಿ. ದೈಹಿಕ ಶಿಕ್ಷಣ ಶಿಕ್ಷಕ 
ಶ್ರಿ ಶೇಖರ್ ವಂದಿಸಿದರು. ಎಲ್ಲ ಸಹಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.




















ವರದಿ---- ಮಹಾಬಲೇಶ್ವರ ಭಾಗ್ವತ್
 ಚಿತ್ರಗಳು: ಅಭಿಷೇಕ್ 10ಎ. 

ಶ್ರಮದಾನ

ಗಾಂಧೀ ಜಯಂತಿ ಪ್ರಯುಕ್ತ ಶ್ರಮದಾನ

ಅಕ್ಟೋಬರ್ 02ರ ಗಾಂಧೀಜಯಂತಿ ಆಚರಣೆ ನಮ್ಮ ಶಾಲೆಯಲ್ಲಿ ನಡೆದ ವಿಧಾನ.








ಚಿತ್ರಗಳು:ನಿರಂಜನ ನಾಯಕ್
           ಪ್ರಭಾರಿ ಮುಖ್ಯ ಶಿಕ್ಷಕರು.

Friday 4 October 2013

ಹಸಿರು ,ಉಸಿರು

ಕ್ಷೇತ್ರ ಸಂಪನ್ಮೂಲ ಕೇಂದ್ರ ,ಕುಂದಾಪುರ ವಲಯ ಇವರ ಸಹಯೋಗದಲ್ಲಿ ಕುಂದಾಪುರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ತಾಲ್ಲೂಕಿನ ಪ್ರಗತಿಪರ ಕೃಷಿಕ
 ಶ್ರೀ ರಾಮ ಭಟ್ಟ ಕೆದೂರು ಇವರಿಂದ ಕೃಷಿ ದರ್ಶನ. ಏಪ್ರಿಲ್ 2013ರಲ್ಲಿ ನಡೆದ ಕಾರ್ಯಕ್ರಮ.
ಸಂಪೂರ್ಣವಾಗಿ ಜೈವಿಕ ಗೊಬ್ಬರಗಳಿಂದ ಕೃಷಿ ನಡೆಸುತ್ತಿರುವ ರೈತ ಶ್ರೀ ರಾಮಭಟ್ಟರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿ ಲಾಭದ ಬಗ್ಗೆ ವಿವರ ನೀಡಿದರು. ಸರಕಾರಿ ಪ್ರೌಢಶಾಲೆ ಕೋಣಿ ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳು & ಶಿಕ್ಷಕರಾದ ಶ್ರೀ ಸದಾನಂದ ಬೈಂದೂರು ನಮ್ಮ ಜೊತೆ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡ ಕ್ಷಣಗಳು.


ಚಿತ್ರಗಳು: ಶ್ರೀ ರೇವಣ್ಣ ಟಿ. ಸ.ಶಿ.ಕಲಾ